ಕಟ್ಟು ಆತ್ಮದ ಓಂ ಮಠಾ

ಮುಗಿಲ ಯೋಗದ ಗಾನ ಹೂಗಳು
ಜ್ಯೋತಿ ಚಿಮ್ಮುತ ಸುರಿಯಲಿ
ಆತ್ಮ ಪರ್ವತ ಶಾಂತಿ ಹೊಳೆಗಳು
ಕಲ್ಲು ನೆಲದಲಿ ಹರಿಯಲಿ

ಮಣ್ಣು ನೆನೆಯಲಿ ಬೆಣ್ಣೆಯಾಗಲಿ
ಕಲ್ಲು ಮಲ್ಲಿಗೆಯಾಗಲಿ
ಮುಳ್ಳು ಬೇಲಿಗೆ ತಾಯಿ ಚುಂಬಿಸಿ
ಭುವನ ಲಿಂಗವ ಮಾಡಲಿ

ಮುಗಿಲು ಮುಗಿಲಿಗೆ ಶೂನ್ಯ ಶೂನ್ಯಕೆ
ಆತ್ಮ ಮಂಚವು ಜೀಕಲಿ
ತೊಗಲ ಹಲಿಗೆಯು ಮಂತ್ರವಾಗಲಿ
ಶಿವನ ಡಂಗುರ ಡಮಿಸಲಿ

ತಾಯಿ ಬಂದಳು ತುಂಬಿ ನಿಂದಳು
ಪೂರ್ಣ ಕುಂಕುಮ ದೇವತೆ
ಭುವನ ದೇವತೆ ಶಿವನೆ ಮಾತೆಯು
ವಿಶ್ವಶಂಕರ ಪೂರ್ಣತೆ

ನೋಡು ಕಳವಳ ಕಾಣು ಉಪಟಳ
ಭುವನ ಹಸಿದಿದೆ ಉತ್ಕಟಾ
ದೇಹ ಕೆಟ್ಟಿದೆ ಆತ್ಮ ಸುಟ್ಟಿದೆ
ಕಟ್ಟು ಆತ್ಮದ ಓಂ ಮಠಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಖಗಳು
Next post ವರ್ಗಿನೋರು

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys